ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಕಾರಣದಲ್ಲಿ ಇನ್ನೂ ಪ್ರಬುದ್ಧರಾಗಿಲ್ಲ. ಅವರಿಗೆ ಇನ್ನಷ್ಟು ಸಮಯ ಬೇಕು ಎಂದು ದೆಹಲಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಹುಲ್ ಪ್ರಬುದ್ಧರಲ್ಲ ಎಂಬುದು ದೇಶಕ್ಕೆ ಗೊತ್ತಿದೆ ಎಂದು ವ್ಯಂಗ್ಯವಾಡಿದೆ.
ರಾಹುಲ್ ಗಾಂಧಿಯನ್ನು ಅಣಕಿಸಲು ಶೀಲಾ ಅವರ ಹೇಳಿಕೆಯನ್ನು ಬಳಸಿಕೊಂಡಿರುವ ಬಿಜೆಪಿ ರಾಹುಲ್ ಪ್ರಬುದ್ಧರಲ್ಲ ಎಂಬುದು ದೇಶಕ್ಕೆ ಗೊತ್ತಿರುವ ಸತ್ಯ. ತಡವಾಗಿಯಾದರೂ ವಾಸ್ತವಾಂಶವನ್ನು ದೃಢಪಡಿಸಲಾಗಿದೆ ಎಂದಿದೆ. ದೇಶದ ಜನರಿಗೆ ಇದು ಗೊತ್ತಿದೆ. ಆದರೆ ಸತ್ಯವನ್ನು ಖಚಿತಪಡಿಸಿದ್ದಕ್ಕೆ ಶೀಲಾ ಅವರಿಗೆ ಧನ್ಯವಾದಗಳು, ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.