ಪ್ರಧಾನಿ ಮೋದಿ ಘೋಷಿಸಿದ ಹಲವಾರು ರಿಯಾಯಿತಿಗಳು ಯುಪಿಎ ಸರಕಾರ ಈ ಹಿಂದೆಯೇ ಘೋಷಿಸಿದೆ. ಉದಾಹರಣೆಗೆ ಗರ್ಭಿಣಿ ಮಹಿಳೆಗೆ 6 ಸಾವಿರ ಆರ್ಥಿಕ ನೆರವು ಕಾರ್ಯಕ್ರಮವನ್ನು ಯುಪಿಎ ಸರಕಾರ, ಇಂದಿರಾ ಗಾಂಧಿ ಮಾತೃತ್ವ ಯೋಜನೆಯ ಹೆಸರಲ್ಲಿ ಘೋಷಿಸಿತ್ತು . ಇದರಲ್ಲಿ ಹೊಸತೇನಿದೆ ಎಂದು ಸೇನೆ ಪ್ರಶ್ನಿಸಿದೆ.
ಏತನ್ಮಧ್ಯೆ, ಪ್ರಧಾನಮಂತ್ರಿ ಮೋದಿ ಮೂಲ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ. ನೋಟು ನಿಷೇಧದಿಂದಾಗಿ ಜನರ ಆರ್ಥಿಕ ಸಂಕಷ್ಟ ಮಿತಿ ಮೀರಿದ್ದು, ಅದಕ್ಕೆ ಪರಿಹಾರ ಪ್ರಕಟಿಸುವಲ್ಲಿ ವಿಫಲವಾಗಿದ್ದಾರೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.