'ಇವರಲ್ಲಿ ಎಷ್ಟು ಜನ ತಮ್ಮ ಮನೆಯಿಂದ ಹೊರ ಬಂದು ಮಹಾರಾಷ್ಟ್ರ ದಿವಸವನ್ನು ಆಚರಿಸಿದ್ದಾರೆ? ಮುಂಬೈನಲ್ಲಿ ಇದ್ದು ಅವರು ಹಣವನ್ನು ಸಂಪಾದಿಸುತ್ತಿದ್ದಾರೆ.ಆದರೆ ಲೈಂಗಿಕ ಕಾರ್ಯಕರ್ತರಂತೆ ಮುಂಬೈನ್ನು ದುರ್ಬಳಕೆ ಮಾಡಿದ್ದಾರೆ. ಕೈಯಲ್ಲಿ ಮಡಕೆಯನ್ನು ಹಿಡಿದುಕೊಂಡು ಬಂದವರು ಬಂಗಾರದ ಜಗತ್ತಿನಲ್ಲಿ ಬದುಕುತ್ತಿದ್ದಾರೆ' ಎಂದು ಸಾಮ್ನಾ ಮೂಲಕ ಶಿವಸೇನೆ ಗುಜರಾತಿಗಳನ್ನು ಹೀನಾಯವಾಗಿ ಟೀಕಿಸಿದೆ.
'ಮುಂಬೈನಲ್ಲಿ ಹಣವನ್ನು ಗಳಿಸುವ, ಈ ಉದ್ಯಮಿಗಳು ದೇಶದ ರಾಜಕೀಯಕ್ಕೆ ಬಾಧೆಯನ್ನು ತರುತ್ತಿದ್ದಾರೆ. ಯಾರು ಪ್ರಧಾನಿ ಆಗಬೇಕೆಂದು ಇವರು ಲೆಕ್ಕ ಹಾಕುತ್ತಿದ್ದಾರೆ. ನರೇಂದ್ರ ಮೋದಿ ಹೆಸರಿನಲ್ಲಿ ಒಟ್ಟಾಗಿ ಮುಂದೆ ಬರುವ ಗುಜರಾತಿ ಮತ್ತು ಇತರ ಸಮುದಾಯಗಳ ಜನರು ಶಿವಾಜಿ ಮಹಾರಾಜ್ ನೆನಪಿಗಾಗಿ ನಡೆಯುವ ಮಹಾರಾಷ್ಟ್ರ ದಿವಸ ಅನ್ನು ಆಚರಿಸಲು ಕೂಡ ಮುಂದೆ ಬರಬೇಕು' ಎಂದು ಸಾಮ್ನಾ ಆಕ್ಷೇಪಿಸಿದೆ.