“ಕೇವಲ ಮೋದಿ ಅಲೆ" ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ, ಜಾರ್ಖಂಡ್ನಲ್ಲಿ, 15 ವರ್ಷಗಳ ನಂತರ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಶ್ರೇಯಸ್ಸು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಸಲ್ಲಬೇಕು ಎಂದು ಠಾಕ್ರೆ ಹೊಗಳಿದ್ದಾರೆ.
ದೆಹಲಿಯಲ್ಲಿ ವಿರೋಧ ಪಕ್ಷಗಳು ಧರ್ಮಪರಿವರ್ತನೆ ವಿಷಯವನ್ನಿಟ್ಟುಕೊಂಡು ಕರ್ಕಶವಾಗಿ ಕೂಗಿಕೊಳ್ಳುತ್ತಿದ್ದರೆ, ", ಮೋದಿ ಜಾರ್ಖಂಡ್ ಮತ್ತು ಕಾಶ್ಮೀರದಲ್ಲಿ ಜನಸಾಮಾನ್ಯರಿಗೆ ನಡುವೆ ಸಾಗಿ ಅಭಿವೃದ್ಧಿ ಕಾರ್ಯಸೂಚಿಯನ್ನು ಪ್ರಚುರ ಪಡಿಸುತ್ತಿದ್ದರು. ಎರಡು ರಾಜ್ಯಗಳಲ್ಲಿ ಮೋದಿ ಅಲೆ ಮ್ಯಾಜಿಕ್ ಮಾಡಿತು. ವಿರೋಧಿಗಳು ಕುಸಿದು ನೆಲಕ್ಕೆ ಬಿದ್ದರು ಎಂದು ಉದ್ಧವ್ ಠಾಕ್ರೆಯವರ ಲೇಖನಿ ಹೇಳುತ್ತದೆ.