ಕಪ್ಪುಹಣ ಮರಳಿ ತರುವುದು ಅವರ ಮೊದಲ ವಾಗ್ದಾನವಾಗಿತ್ತು. ಇತ್ತೀಚಿಗಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ಹಣವನ್ನಿಟ್ಟವರು ಶುದ್ಧಹಸ್ತರಾಗಿ ಹೊರಬನ್ನಿ ಅಥವಾ ಮುಂದಿನ ಕ್ರಮವನ್ನೆದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ. ಹಾವಿನ್ನೂ ಬಿಲದಲ್ಲಿದೆ, ಹೊರಬರಲು ನಿರಾಕರಿಸುತ್ತಿದೆ ಎಂದು ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.