ಮುಂಬೈನ ಬಹುತೇಕ ಎಲ್ಲ ಸುದ್ದಿ ಪತ್ರಿಕೆಗಳು ಮೋದಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಲೇಖನಗಳನ್ನು, ವರದಿಯನ್ನು ಪ್ರಕಟಿಸಿದ್ದವು. ಆದರೆ, ಮೋದಿ ಅವರು ಮಥುರಾದಲ್ಲಿ ನಡೆಸಿದ ಬೃಹತ್ ಮೆರವಣಿಗೆ ಕುರಿತು ಚಿಕ್ಕ ಸುದ್ದಿಯನ್ನು ಹೊರತುಪಡಿಸಿ, 'ಸಾಮ್ನಾ'ದಲ್ಲಿ ಸರ್ಕಾರದ ಮೊದಲ 365 ದಿನಗಳ ಅವಲೋಕನ ಮಾಡಿ ಯಾವುದೇ ವರದಿಯನ್ನು ಪ್ರಕಟಿಸಲಾಗಿಲ್ಲ.
ತಾವು ಕೂಡ ಸರಕಾರದ ಭಾಗವಾಗಿದ್ದರು ಕೂಡ ಮೋದಿ ಸರಕಾರದ ಕಾರ್ಯವೈಖರಿಯ ಕುರಿತು ಶಿವಸೇನೆ ತೃಪ್ತಿಯನ್ನು ಹೊಂದಿಲ್ಲ. ಭೂ ಸ್ವಾಧೀನ ಮಸೂದೆ, ಜೀವವಿಮೆಯಲ್ಲಿ ಎಫ್ಡಿಐ ಸೇರಿದಂತೆ ಜೈತಾಪುರ್ ಪರಮಾಣು ಶಕ್ತಿ ಯೋಜನೆ ಕುರಿತು ಸೇನೆ ಬಹಿರಂಗವಾಗಿ ವಿರೋಧ ವ್ಯಕ್ತ ಪಡಿಸಿದೆ.