ಸೇನೆಯ ಈ ಅಪಹಾಸ್ಯಕ್ಕೆ ಗರಂ ಆಗಿರುವ ಬಿಜೆಪಿ ತಮ್ಮ ಕಾರ್ಯಕರ್ತರಿಗೆ ಲಗಾಮು ಹಾಕದಿದ್ದರೆ ತಕ್ಕ ಉತ್ತರ ನೀಡುವುದಾಗಿ ಶಿವಸೇನೆ ನಾಯಕರಿಗೆ ಎಚ್ಚರಿಕೆ ನೀಡಿದೆ. ಶಾ ಮತ್ತು ಬಿಜೆಪಿ ಮುಖ್ಯ ವಕ್ತಾರ ಮಾಧವ್ ಭಂಡಾರಿ ಅವರನ್ನು ಶೋಲೆ ಸಿನಿಮಾದ ಪಾತ್ರಧಾರಿಗಳಂತೆ ಚಿತ್ರಿಸಲಾಗಿತ್ತು. ಜತೆಗೆ ಪಕ್ಷದ ನಗರ ಘಟಕದ ಮುಖ್ಯಸ್ಥ ಆಶೀಶ್ ಸೆಲಾರ್ ಅವರ ಪ್ರತಿಕೃತಿಯನ್ನು ಸುಟ್ಟು ಹಾಕಲಾಗಿತ್ತು.