ದೇಶದ ಕೆಲ ರಾಜ್ಯಗಳಲ್ಲಿ ವರುಣ ಆರ್ಭಟಿಸುತ್ತಿದ್ದು, ಭಾರೀ ಮಳೆಯಾಗುತ್ತಿರುವ ಮಧ್ಯಪ್ರದೇಶದಲ್ಲಿ ಉಕ್ಕೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ನದಿಯ ನೀರಿನಲ್ಲಿ ಬೈಕ್ ಚಲಾಯಿಸಿಕೊಂಡು ಹೋದ ಯುವಕನೊಬ್ಬ ಕೊಚ್ಚಿ ಹೋಗಿರುವ ಕರುಣಾಜನಕ ಘಟನೆ ವರದಿಯಾಗಿದೆ.
ತಡೆಗೋಡೆಯಿಲ್ಲದ ಸೇತುವೆಯ ಮೇಲೆ ನದಿ ನೀರು ಹರಿಯುತ್ತಿರುವುದನ್ನು ನೋಡುತ್ತಾ ಅನೇಕ ಜನ ನದಿಯ ಇಕ್ಕೆಲಗಳಲ್ಲಿ ನಿಂತಿದ್ದರು. ಆ ಸಮಯದಲ್ಲಿ ಬೈಕ್ ಮೇಲೆ ಅಲ್ಲಿಗೆ ಬಂದ ಯುವಕ ಸ್ವಲ್ಪ ಸಮಯ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ . ಒಮ್ಮೆಲೆ ಸ್ಟಂಟ್ ಮಾಡೋ ಹುಮ್ಮಸ್ಸಿನಲ್ಲಿ, ನೀರಿನ ಜತೆ ಪೈಪೋಟಿಗಿಳಿದ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ಚಲಾಯಿಸಿದ ಆತ ಎಲ್ಲರೂ ನೋಡುತ್ತಿರುವಂತೆ ನೀರಿನ ಸೆಳೆತದಲ್ಲಿ ಕೊಚ್ಚಿ ಹೋದ.