ಇದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಬಿಹಾರಿನ ಪಂಚಾಯತ್ ಒಂದು ಅತ್ಯಾಚಾರ ಆರೋಪಿ ಬಳಿ, ಪೀಡಿತೆಗೆ 41, 000 ರೂಪಾಯಿ ನೀಡುವಂತೆ ಆದೇಶಿಸಿದೆ ಮತ್ತು ಪೀಡಿತೆಗೆ ಆ ಹಣವನ್ನು ಪಡೆದುಕೊಂಡು ಅತ್ಯಾಚಾರ ನಡೆದಿರುವ ಸಂಗತಿಯನ್ನು ಮರೆತು ಬಿಡು ಎಂದು ತೀರ್ಪು ನೀಡಿದೆ.ಆರೋಪಿ ಕೂಡ ಪಂಚಾಯತ್ ಸದಸ್ಯನಾಗಿದ್ದಾನೆ.
ಪೊಲೀಸರ ಪ್ರಕಾರ ಕಳೆದ ತಿಂಗಳು ಈ ಘಟನೆ ನಡೆದಿದ್ದು, ಇಂದಿರಾ ಆವಾಸ್ ಯೋಜನೆಗೆ ಅವಶ್ಯವಾಗಿರುವ ದಾಖಲೆಗಳನ್ನು ಸಿದ್ಧಪಡಿಸಲು ಆರೋಪಿ ಪ್ರಕಾಶ್ ಪೀಡಿತೆಯನ್ನು ಪಂಚಾಯತ್ ಕಟ್ಟಡಕ್ಕೆ ಬರುವಂತೆ ಕರೆದಿದ್ದ. ಅಲ್ಲಿಗೆ ಒಬ್ಬಳೇ ಬಂದಿದ್ದ ಆಕೆಯ ಮೇಲೆರಗಿ ಆತ ಅತ್ಯಾಚಾರ ಎಸಗಿದ್ದಾನೆ ಮತ್ತು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ ಎಂದು ವರದಿಯಾಗಿದೆ.