ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದರೂ ಸತತ 6 ದಿನಗಳ ಕಾಲ ಜೀವವನ್ನು ಹಿಡಿದುಕೊಂಡಿದ್ದ ವೀರಯೋಧ, ಹುತಾತ್ಮ ಹನುಮಂತ ಕೊಪ್ಪದ್ ಪತ್ನಿ ಮಹಾದೇವಿಗೆ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಉದ್ಯೋಗ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇದನ್ನು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಿತ್ತು ತಮ್ಮ ಪತಿಯ ಸಾವಿನಿಂದ ಜರ್ಜರಿತವಾಗಿದ್ದರೂ ಆತನ ಶೌರ್ಯ, ತ್ಯಾಗಕ್ಕೆ ಅಭಿಮಾನ ವ್ಯಕ್ತ ಪಡಿಸಿದ್ದ ಪತ್ನಿ ತನ್ನ ಮಗಳನ್ನು ಸಹ ತಂದೆಯಂತೆ ಮಿಲಿಟರಿಗೆ ಸೇರಿಸುವುದಾಗಿ ಹೇಳಿದ್ದರು.
ರಾಜ್ಯ ಸರ್ಕಾರ ಹನುಮಂತಪ್ಪ ಕೊಪ್ಪದ್ ಪರಿವಾರಕ್ಕೆ 25 ಲಕ್ಷ ರೂಪಾಯಿ ಪರಿಹಾರ, 4 ಎಕರೆ ಜಮೀನು ನೀಡಿತ್ತು. ಅಲ್ಲದೇ ಕೊಪ್ಪದ್ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಒಂದು ವರ್ಷವಾದರೂ ಭರವಸೆಯಾಗಿಯೇ ಉಳಿದಿತ್ತು.