ಮುಖ್ಯಕಾರ್ಯದರ್ಶಿ ಕೆ.ಜ್ಞಾನದೇಸಿಕನ್ ಅವರನ್ನು ಭೇಟಿ ಮಾಡಿ ಹಣದ ಚೆಕ್ ನೀಡಲು ಹಲವಾರು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ದೊರೆಯಲಿಲ್ಲ. ಇದು ರಾಜಕೀಯ ವಿಷಯವಲ್ಲ. ಒಂದು ವೇಳೆ, ಹಣವನ್ನು ಸರಕಾರ ಸ್ವೀಕರಿಸದಿದ್ದಲ್ಲಿ ಮಾಧ್ಯಮಗಳ ಮುಂದೆ ಹೋಗುವುದಾಗಿ ಹೇಳಿಕೆ ನೀಡಿದ ನಂತರ ಡಿಎಂಕೆ ನೀಡಿದ ಚೆಕ್ ಸರಕಾರ ಸ್ವೀಕರಿಸಿತು ಎಂದು ಸ್ಟಾಲಿನ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರ ಈಗಾಗಲೇ 939.63 ಕೋಟಿ ರೂಪಾಯಿಗಳ ಪ್ರವಾಹ ಪ್ರಕೋಪ ನಿಧಿಯನ್ನು ನೀಡಿದ್ದು, ಸರ್ವಪಕ್ಷಗಳ ಸಮಿತಿ ಹಣವನ್ನು ವಿತರಿಸಿದಲ್ಲಿ, ಪ್ರತಿಯೊಬ್ಬ ಪ್ರವಾಹ ಪೀಡಿತರಿಗೆ ನ್ಯಾಯ ದೊರೆಯಲಿದೆ ಎಂದು ಸ್ಟಾಲಿನ್ ಸಲಹೆ ನೀಡಿದ್ದಾರೆ.