ಸೌದಿ ಅರೇಬಿಯಾ ದೇಶದಿಂದ ಉಚ್ಚಾಟನೆಗೊಂಡು ಹೈದ್ರಾಬಾದ್ಗೆ ಬಂದಿಳಿದು, ತೆಲಂಗಾಣಾ ಪೊಲೀಸರಿಂದ ಬಂಧಿತನಾದ ಅಬ್ದುಲ್ ಅಜೀಜ್, ಪಾಕಿಸ್ತಾನದ ಎಲ್ಇಟಿ ಮುಖಂಡರಾದ ಮೊಹಮ್ಮದ್ ಇಸ್ಮಾಯಿಲ್ ಮತ್ತು ಸಲೀಮ್ ಜುನೈದ್ ಅವರಿಗೆ ಸಂದೇಶ ರವಾನಿಸಿ, ಇತರ ದೇಶಗಳಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿರುವಂತೆ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿಲ್ಲ. ಆದ್ದರಿಂದ, ಬಾರತದಲ್ಲಿ ಜಿಹಾದ್ ಹೋರಾಟ ಅಗತ್ಯವಿಲ್ಲ ಎಂದು ತಿಳಿಸಿದ್ದಾನೆ.
ಏತನ್ಮಧ್ಯೆ, ಸೌದಿ ಮೂಲದ ಇಂಟರ್ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಆರ್ಗನಜೇಶನ್ ನಿರ್ದೇಶಕ ಶೇಖ್ ಅಹ್ಮದ್, ಬಾಬ್ರಿ ಮಸೀದಿ ನೆಲಸಮಗೊಳಿಸಿದ ಭಾರತದಲ್ಲಿ, ಜಿಹಾದ್ ಹೋರಾಟ ಆರಂಭಿಸುವಂತೆ ಪ್ರೇರೇಪಿಸಿ ಅಜೀಜ್ಗೆ 9.5 ಲಕ್ಷ ರೂಪಾಯಿಗಳನ್ನು ನೀಡಿದ್ದ ಎಂದು ಮೂಲಗಳು ತಿಳಿಸಿವೆ.