ಮೋದಿಯವರ ವಾಹನ ಸಾಗದಂತೆ ತಡೆಯಲು ಯತ್ನಿಸಿ ನಂತರ ಬೆಂಗಾವಲು ಪಡೆ ವಾಹನಗಳಿಗೆ ದಾರಿ ಬಿಡಲು ನಿರಾಕರಿಸಿ, ಮೋದಿಯವರನ್ನು ಭೇಟಿಯಾಗಲೇಬೇಕು ಎಂದು ಹೇಳಿದ್ದಾಳೆ.ನಂತರ ಭದ್ರತಾ ಸಿಬ್ಬಂದಿ ಒತ್ತಾಯಪೂರ್ವಕವಾಗಿ ಆಕೆಯನ್ನು ಬದಿಗೆ ಸರಿಸಿ ಹೋಗುತ್ತಿರುವ ಸಂದರ್ಭದಲ್ಲಿ ಮಹಿಳೆ ಕೋಪದಿಂದ ಹೂ ಕುಂಡವನ್ನು ಬೆಂಗಾವಲು ವಾಹನಗಳ ಮೇಲೆ ಎಸೆದಿದ್ದಾಳೆ.