ನಾವು ಕಾಂಗ್ರೆಸ್ ಪಕ್ಷದ ಹಳೆಯದಾದ ಚೀನಾ ನೀತಿಗಳನ್ನು ಪಾಲಿಸುತ್ತಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ಚೀನಾ ನೀತಿಗಳನ್ನು ರೂಪಿಸುವಂತಾಗಲು ತಜ್ಞರ ಸಭೆ ಕರೆಯಬೇಕು. ಇದರಿಂದ ನಮ್ಮ ಸಾಮರ್ಥ್ಯ, ದುರ್ಬಲತೆ ಮತ್ತು ಅವಕಾಶಗಳ ಅನಾವರಣವಾಗುತ್ತದೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.
ಚೀನಾದ ಅಧ್ಯಕ್ಷ ಜಿನ್ಪಿಂಗ್ ಭಾರತಕ್ಕೆ ಭೇಟಿ ನೀಡಿರುವುದು, ಮೋದಿ ಚೀನಾಕ್ಕೆ ಭೇಟಿ ನೀಡಿದ್ದರಿಂದ ಮಹತ್ವದ ಸಾಧನೆಯಾಗಿಲ್ಲ. ಕೇವಲ ಚೀನಾದ ಖಾಸಗಿ ಕ್ಷೇತ್ರದ ಕಂಪೆನಿಗಳಉ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಮ್ಮತಿ ಮಾತ್ರ ಸೂಚಿಸಿವೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.