ಮಧ್ಯಪ್ರದೇಶದ ಮಾತಾಬಾಸೈಯಾಕ್ಕೆ ಸೇರಿದ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದಳು. ಅಕಾಲ ಮರಣಕ್ಕೀಡಾದ ಆಕೆ ದೆವ್ವವಾಗಿ ತಮಗೆ ಕಾಡಬಹುದೆಂಬ ಮೂಡನಂಬಿಕೆಯಿಂದ ಭಯಕ್ಕೊಳಗಾದ ಆಕೆಯ ಗಂಡನ ಮನೆಯವರು ಆಕೆ ಕಾಲಿಗೆ ಪಿನ್ಗಳನ್ನು ಚುಚ್ಚಿದರು. ಮೃತ ಶರೀರದ ಅಂತ್ಯಸಂಸ್ಕಾರ ಮಾಡುವ ಮೊದಲು ಆಕೆಯ ತವರಿನ ಕಡೆಯವರು ಸ್ಥಳಕ್ಕೆ ಆಗಮಿಸಿದ್ದರಿಂದ ಈ ಅಂಧ ಆಚರಣೆ ಬೆಳಕಿಗೆ ಬಂದಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಹೇಳುತ್ತದೆ.
ಮೃತಳ ತವರಿನ ಕಡೆಯವರನ್ನು ಕಂಡ ಕೂಡಲೇ ಗಂಡನ ಮನೆಯವರೆಲ್ಲ ಸ್ಥಳದಿಂದ ಪರಾರಿಯಾದರು. ಆಕೆಯ ಸಾವು ಹೇಗಾಗಿದೆ ಎಂಬುದು ಇನ್ನು ಕೂಡ ಬಹಿರಂಗಗೊಂಡಿಲ್ಲ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ವರದಿ ಬಂದ ನಂತರವೇ ಸತ್ಯ ಬಹಿರಂಗಗೊಳ್ಳಲಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಲ್ಲಿ ಗಾಯವಿದ್ದು, ಉದರಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಆಕೆ ಸಾವಿಗೀಡಾಗಿರಬಹುದು ಎಂದು ಹೇಳಿದ್ದಾರೆ.