ಕಮಲಕ್ಕೆ ಬೆಂಬಲ ತಾತ್ಕಾಲಿಕ: ಶಿವಸೇನಾ

ಮಂಗಳವಾರ, 21 ಫೆಬ್ರವರಿ 2017 (09:25 IST)
ದೇವೇಂದ್ರ ಫಡ್ನವೀಸ್ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿರುವ ಬೆಂಬಲ ತಾತ್ಕಾಲಿಕ ಎಂದು ಶಿವಸೇನೆ ಹೇಳಿದೆ.

ನಾವು ಬಿಜೆಪಿಗೆ ನೀಡಿರುವ ಬೆಂಬಲ ತಾತ್ಕಾಲಿಕವಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಿಷ್ಯ ಅನಿಶ್ಚಿತವಾಗಿದೆ. ಅವರ ಕುರ್ಚಿಯೇ ಅಲ್ಲಾಡುತ್ತಿರುವಾಗ ಅವರು ಮುಂಬೈ ಭವಿಷ್ಯ ಬದಲಿಸುವ ಮಾತನ್ನಾಡುತ್ತಾರೆ, ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ವ್ಯಂಗ್ಯವಾಡಲಾಗಿದೆ.
 
ರಾಜ್ಯದಲ್ಲಿ ಸ್ಥಿರ ಸರ್ಕಾರವಿರಬೇಕೆಂಬ ಕಾರಣಕ್ಕೆ ಬಿಜೆಪಿಗೆ ತಾತ್ಕಾಲಿಕ ಬೆಂಬಲ ನೀಡಲಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಡೆ ಗಮನವಹಿಸಿದ್ದರೆ ಇಂದು ಮತದಾರರ ಮುಂದೆ ಓಟಿಗಾಗಿ ಭಿಕೆ ಬೇಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಟೀಕಿಸಲಾಗಿದೆ.
 
 
ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಕೇವಲ ಒಂದು ದಿನದ ಮುನ್ನ ಮಿತ್ರ ಪಕ್ಷವನ್ನು ಕೆಣಕುವ ಮೂಲಕ ಶಿವಸೇನೆ ಬೆಳೆಯುತ್ತಿರುವ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ.
 

ವೆಬ್ದುನಿಯಾವನ್ನು ಓದಿ