ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ಕನ್ಹೈಯ್ಯಾ ಕುಮಾರ್, ತಿಹಾರ್ ಜೈಲಿನಲ್ಲಿ ತಮಗೆ ಪ್ರಾಣ ಭೀತಿ ಇದ್ದು, ಜಾಮೀನು ಮಂಜೂರುಗೊಳಿಸುವಂತೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ತುರ್ತು ವಿಚಾರಣೆ ನಡೆಸುವಂತೆ ಹೈಕೋರ್ಟ್ಗೆ ಸಹ ಸುಪ್ರೀಂ ಸೂಚಿಸಿದ್ದು, ಕನ್ಹೈಯ್ಯಾ ಪರ ವಕೀಲರು ಇಂದು ಮಧ್ಯಾಹ್ನ 2 ಗಂಟೆಯೊಳಗೆ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಹೈಕೋರ್ಟ್ ಇಂದೇ ವಿಚಾರಣೆಯನ್ನು ಕೈಗೆತ್ತಿಕೊಂಡರೆ ಕನ್ಹೈಯ್ಯಾ ಕುಮಾರ್ಗೆ ಇಂದು ಸಂಜೆಯೊಳಗೆ ಜಾಮೀನು ಸಿಗಬಹುದು. ಆದರೆ ಇಂದು ಜಾಮೀನು ಸಿಗದಿದ್ದರೆ ಸೋಮವಾರದವರೆಗೆ ಅವರಿಗೆ ಜೈಲೇ ಗತಿಯಾಗಲಿದೆ.