ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ನಿರಂಜನ್ ಭಟ್ವಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠ, ಈ ಕುರಿತು ತೀರ್ಮಾನ ಕೈಗೊಳ್ಳುವ ಮುನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಭಿಪ್ರಾಯವನ್ನು ಪಡೆದುಕೊಳ್ಳಲು ಬಯಸಿದ್ದು, ಸರಕಾರಗಳಿಗೆ ನೋಟಿಸ್ ಕಳುಹಿಸಿದೆ.
ಸಂವಿಧಾನ ರಚನಾ ಸಭೆಯು ದೇಶಕ್ಕೆ ಭಾರತ, ಹಿಂದೂಸ್ತಾನ, ಭಾರತ್ ಭೂಮಿ, ಭರತ ವರ್ಷ,ಇತ್ಯಾದಿ ಹೆಸರು ಇಡುವಂತೆ ಸಲಹೆ ನೀಡಿತ್ತು ಎಂದು ಪಿಐಎಲ್ನಲ್ಲಿ ಹೇಳಲಾಗಿದೆ.