‘ಸೂರ್ಯ ನಮಸ್ಕಾರ, ಸರ್ಕಾರದ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಯೋಗ ಕಾರ್ಯಕ್ರಮದ ಭಾಗ ಅಲ್ಲ. ಅಲ್ಲದೆ ‘ಓಂ’ ಮಂತ್ರೋಚ್ಚಾರಣೆ ಕಡ್ಡಾಯವಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಾವು ಇಷ್ಟಪಟ್ಟ ದೇವರ ಹೆಸರನ್ನು ಪಠಿಸಬಹುದು’ ಎಂದು ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಗುರುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಸಚಿವರು, ಸಾರ್ವಜನಿಕ ವ್ಯಕ್ತಿಗಳು, ರಾಜತಾಂತ್ರಿಕ ಅಧಿಕಾರಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು, ಎನ್ಸಿಸಿ ಕೆಡೆಟ್ಗಳು ಮತ್ತು ಭದ್ರತಾಪಡೆ ಮುಖ್ಯಸ್ಥರು ನವದೆಹಲಿಯಲ್ಲಿ ನಡೆಯಲಿರುವ ಸಾಮೂಹಿಕ ಯೋಗ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗಸಂಸ್ಥೆಯ ತರಬೇತುದಾರರು ಕಳೆದ 15 ದಿನಗಳಿಂದ ಇವರಿಗೆಲ್ಲ ಯೋಗ ಹೇಳಿಕೊಡುತ್ತಿದ್ದಾರೆ.