ಹರಿಯಾಣಾ ಮುಖ್ಯಮಂತ್ರಿ ಗಾದಿ ರೇಸ್‌ನಲ್ಲಿ ಸುಷ್ಮಾ, ಕೃಷ್ಣಪಾಲ್ ಗುರ್ಜಾರ್ ?

ಭಾನುವಾರ, 19 ಅಕ್ಟೋಬರ್ 2014 (16:38 IST)
ಭಾರತೀಯ ಜನತಾ ಪಕ್ಷ (ಬಿಜೆಪಿ) ಹರಿಯಾಣ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಿಸಬೇಕಿದ್ದು,  ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಕ್ಷದ ಹಿರಿಯ ನಾಯಕ ಕೃಷ್ಣಪಾಲ್ ಗುರ್ಜಾರ್ ಹೆಸರುಗಳು ಸಿಎಂ ಕುರ್ಚಿ ರೇಸ್‌ನಲ್ಲಿ ಈಗಾಗಲೇ ಸುತ್ತು ಹೊಡೆಯುತ್ತಿವೆ. 

ಹರಿಯಾಣಾದವರಾಗಿರುವ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್, ಅಕ್ಟೋಬರ್ 15ರವರೆಗೆ ವಿಧಾನಸಭಾ ಚುನಾವಣೆ ಸಂಬಂಧ ರಾಜ್ಯದಲ್ಲಿ ಸಕ್ರಿಯ ಪ್ರಚಾರ ನಡೆಸಿದ್ದರು. 
 
ಏತನ್ಮಧ್ಯೆ, ಕೇಂದ್ರ ಸಚಿವ ಮತ್ತು ಮಾಜಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪಾಲ್ ಗುರ್ಜಾರ್ ಹೆಸರು ಕೂಡ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕೇಳಿಬರುತ್ತಿರುವ ಸಂಭಾವ್ಯ ಹೆಸರಾಗಿದೆ. ಫರಿದಾಬಾದ್ ಸಂಸದರಾಗಿರುವ, ಅವರು ರಾಜ್ಯದಲ್ಲಿ ಗುರ್ಜರ್ ಸಮುದಾಯದ ಪ್ರಬಲ ಬೆಂಬಲ ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ