ವೆಂಕಯ್ಯ ನಾಯ್ಡುಗೆ ರಾಖಿ ಕಟ್ಟಿದ ಸುಷ್ಮಾ ಸ್ವರಾಜ್

ಶನಿವಾರ, 29 ಆಗಸ್ಟ್ 2015 (16:20 IST)
ಸಂಪೂರ್ಣ ದೇಶ ಇಂದು ರಕ್ಷಾಬಂಧನವನ್ನಾಚರಿಸುತ್ತಿದ್ದು, ರಾಜಕಾರಣಿಗಳು ಸಹ ಸಡಗರದಿಂದ ಸಹೋದರ ಸಹೋದರಿಯರ ಬಾಂಧವ್ಯವನ್ನು ಸಾರುವ ಹಬ್ಬದ ಆಚರಣೆಯಲ್ಲಿ ವ್ಯಸ್ತರಾಗಿದ್ದಾರೆ.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರಿಗೆ ದೆಹಲಿಯಲ್ಲಿ ರಾಖಿ ಕಟ್ಟುವ ಮೂಲಕ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಈ ಶುಭದಿನವನ್ನು ಆಚರಿಸಿದರು.  ಪ್ರಧಾನಿ ಮೋದಿ ಮತ್ತು  ರಾಷ್ಟ್ರಪತಿಗಳು ಸಹ ದೇಶದ ನಾಗರಿಕರಿಗೆ ರಕ್ಷಾಬಂಧನದ ಶುಭ ಹಾರೈಕೆಗಳನ್ನು ಕೋರಿದ್ದಾರೆ. 
 
ಹಲವಾರು ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಮತ್ತು ಮುದ್ದು ಮಕ್ಕಳಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ  ಪ್ರಧಾನಿ ಮೋದಿ ರಕ್ಷಾಬಂಧನವನ್ನು ಆಚರಿಸಿದರು. ವಾರಣಾಸಿ ಮತ್ತು ವೃಂದಾವನದ ಹಿರಿಯ ವಿಧವೆಯರು ಸಹ ಕಳೆದ ವರ್ಷದಂತೆ ಈ ಬಾರಿ ಸಹ ಪ್ರಧಾನಿ ಮೋದಿಯವರಿಗೆ ರಕ್ಷಾಬಂಧನವನ್ನು ಕಳುಹಿಸಿದ್ದಾರೆ. 
 
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಕ್ಕಳೊಂದಿಗೆ ರಕ್ಷಾಬಂಧನವನ್ನು ಆಚರಿಸಿದರು ಮತ್ತು ಮರಕ್ಕೆ ರಾಖಿ ಕಟ್ಟಿ ವಿಶೇಷತೆಯನ್ನು ಮೆರೆದರು. 
 
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಂಜ್ರಿವಾಲ್ ತಮ್ಮ ಸಹೋದರಿಯ ಜತೆ ರಕ್ಷಾಬಂಧವನ್ನಾಚರಿಸಲು ಹರಿದ್ವಾರಕ್ಕೆ ತೆರಳಿದ್ದಾರೆ. 

ವೆಬ್ದುನಿಯಾವನ್ನು ಓದಿ