ಡಿಡಿಸಿಎ ಪ್ರಕರಣದಲ್ಲಿ ನಡೆದ ಭ್ರಷ್ಟಾಚಾರದ ಕುರಿತಂತೆ ಪ್ರಧಾನಿ ಮೋದಿ ಸರಕಾರ ಮೌನವಾಗಿದ್ದು ಸಿಬಿಐ ಕೂಡಾ ಕೇಂದ್ರ ಸರಕಾರದ ಪಂಜರದಲ್ಲಿರುವ ಗಿಣಿಯಾಗಿದೆ. ಆದ್ದರಿಂದ, ಮೋದಿ ಸರಕಾರ ಮತ್ತು ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಅನಾತ್ತುಗೊಂಡ ಬಿಜೆಪಿ ಸಂಸದ ಕೀರ್ತಿ ಆಜಾದ್ ಹೇಳಿದ್ದಾರೆ.
ಸಚಿವ ಜೇಟ್ಲಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಆಜಾದ್, ಡಿಡಿಸಿಎಗೆ ಬೆಂಬಲಿತ ಆಡಿಟರ್ ನೇಮಕ ಮಾಡುವಂತೆ ಜೇಟ್ಲಿ ಡಿಡಿಸಿಎಗೆ ಅನಾಮಧೇಯ ಇ-ಮೇಲ್ ಕಳುಹಿಸಿದ್ದಲ್ಲದೇ ಆಜಾದ್ ಮತ್ತು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ರಹಸ್ಯ ಮಾಹಿತಿ ರವಾನಿಸಿದ್ದರು ಎಂದು ಆರೋಪಿಸಿದ್ದಾರೆ.