ಹುರಿಯತ್ ಕಾನ್ಫರೆನ್ಸ್ ವಕ್ತಾರ ಅಯಾಝ್ ಅಕ್ಬರ್ ಈ ಬುಧವಾರ ಇದನ್ನು ಸ್ಪಷ್ಟಪಡಿಸಿದ್ದು, ಗಿಲಾನಿ ಸಾಹೇಬರ ಪತ್ರವನ್ನು ನವದೆಹಲಿಯಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅವರ ಬಳಿ ನೀಡಿ ಪಾಕ್ ಪ್ರಧಾನಿ ನವಾಜ್ ಶರೀಫ್ಗೆ ತಲುಪಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ಗಿಲಾನಿಯವರ ಪ್ರಮುಖ ಸಹಚರರಾದ ಆಯಾಝ್ ಅಕ್ಬರ್, ಪೀರ್ ಸೈಫುಲ್ಲಾ, ಅಲ್ತಾಫ್ ಅಹಮದ್ ಒಳಗೊಂಡ ಮೂವರು ಸದಸ್ಯರ ನಿಯೋಗ ನಿನ್ನೆ ಬಸಿತ್ ಕಚೇರಿಗೆ ಭೇಟಿ ನೀಡಿ ಗಂಟೆಗಳ ಕಾಲ ಮಾತುಕತೆ ನಡೆಸಿತು.