ಕಳೆದೆರಡು ದಿನಗಳಿಂದ ಪಂಜಾಬ್ ಪ್ರವಾಸದಲ್ಲಿರುವ ಆಪ್ ಮುಖಂಡ ತಲವಾಂಡಿ ಸಾಬೋ ಪ್ರಾಂತ್ಯದ ಹಳ್ಳಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತ ನಮ್ಮ ವಿರೋಧಿ ಪಕ್ಷದವರಿಂದ ಪ್ರತಿ ಮತಕ್ಕೆ ಕನಿಷ್ಠ 4,000 ಬೇಡಿಕೆ ಇಡಿ. ಆದರೆ ಪ್ರಾಮಾಣಿಕತೆಯಿಂದ ಆಪ್ ಪಕ್ಷಕ್ಕೆ ಮತ ನೀಡಿ ಎಂದು ಕರೆ ನೀಡಿದ್ದಾರೆ.
ಕೆಲವು ಪಕ್ಷಗಳು ತಮಗೆ ಮತ ನೀಡಿದರೆ ಬೈಕ್ ಕೊಡುತ್ತೇವೆ ಎಂದು ಆಮಿಷ ಒಡ್ಡಿದರು ಎಂದು ಭಾಗಿ ವಂಡರ್ ಹಳ್ಳಿಯ ಆಪ್ ಸಮರ್ಥಕರು ದೂರಿದಾಗ, ಅಂತಹ ಉಡುಗೊರೆಗಳನ್ನು ಒಪ್ಪಿಕೊಳ್ಳಿ, ಆದರೆ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ನೀಡಿ ಎಂದು ಅವರು ಹೇಳಿದರು.
ದೆಹಲಿ ಮುಖ್ಯಮಂತ್ರಿಯಾಗಿ ತಾವು ಉತ್ತಮ ಕಾರ್ಯಗಳನ್ನು ಮಾಡಿದ್ದಾಗಿ ಹೇಳಿದ ಅವರು ನಮ್ಮ 49 ದಿನಗಳ ಅಧಿಕಾರವಧಿಯಲ್ಲಿ ಪೋಲಿಸರು ಲಂಚ ಪಡೆಯುವುದನ್ನು ನಿಲ್ಲಿಸಿದ್ದರು. ಸರಕಾರಿ ಕಚೇರಿಗಳಲ್ಲಿ ಭೃಷ್ಟಾಚಾರ ಸಂಪೂರ್ಣವಾಗಿ ನಿಂತಿತ್ತು. 2017ರಲ್ಲಿ ನಾವು ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಇಲ್ಲಿಯೂ ಪುನರಾವರ್ತಿಸಲಿದ್ದೇವೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.