ಪನೀರ್ ಸೆಲ್ವಂ ಭಯದಿಂದ ಚಿನ್ನಮ್ಮ ಶಶಿಕಲಾ ಭೇಟಿ ರದ್ದುಗೊಳಿಸಿದ ಸಿಎಂ ಪಳನಿಸ್ವಾಮಿ!

ಶುಕ್ರವಾರ, 17 ಫೆಬ್ರವರಿ 2017 (10:15 IST)
ಚೆನ್ನೈ: ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ನಿನ್ನೆ ಸಂಜೆಯೇ ರಾಜ್ಯಪಾಲರ ಭೇಟಿಯ ನಂತರ ತಮಿಳುನಾಡಿನ ನೂತನ ಸಿಎಂ ಪಳನಿಸ್ವಾಮಿ ಬೆಂಗಳೂರಿನ ಜೈಲಿನಲ್ಲಿರುವ ಶಶಿಕಲಾ ನಟರಾಜನ್ ರನ್ನು ಭೇಟಿಯಾಗಬೇಕಿತ್ತು. ಆದರೆ ಆಗಲಿಲ್ಲ.


ನಿನ್ನೆ ಸಂಜೆ ಪ್ರಮಾಣ ವಚನ ಸ್ವೀಕಾರ ಸಮಾರಂಭವಿದ್ದ ಕಾರಣ ಅವರ ಬೆಂಗಳೂರು ಭೇಟಿ ರದ್ದಾಗಿತ್ತು. ಇದೀಗ ಇಂದಾದರೂ ಚಿನ್ನಮ್ಮನ ಆಶೀರ್ವಾದ ಪಡೆಯುವ ಅವರ ಆಸೆಗೆ ಪೆಟ್ಟು ಬಿದ್ದಿದೆ. ಇದಕ್ಕೆಲ್ಲಾ ಕಾರಣ ಪನೀರ್ ಸೆಲ್ವಂ ಬಣದ ಪ್ರತಿಭಟನೆಯ ಭೀತಿ ಒಂದೆಡೆಯಾದರೆ, ಇನ್ನೊಂದೆಡೆ ಕಾನೂನು ತಜ್ಞರ ಸಲಹೆಯೂ ಕಾರಣ.

ಬಹುಮತ ಸಾಬೀತುಪಡಿಸುವ ಮೊದಲೇ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲಿನಲ್ಲಿರುವ ವ್ಯಕ್ತಿಯನ್ನು ಭೇಟಿಯಾಗುವುದು ಸರಿಯಲ್ಲ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಕ್ಕೆ ಪಳನಿಸ್ವಾಮಿ ಚಿನ್ನಮ್ಮನ ಭೇಟಿ ರದ್ದು ಮಾಡಿದ್ದಾರೆ. ಬಹುಶಃ ಬಹುಮತ ಸಾಬೀತುಪಡಿಸಿದ ನಂತರ ಚಿನ್ನಮ್ಮನನ್ನು ಭೇಟಿಯಾಗಬಹುದೆಂದು ಸಮಾಧಾನಪಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ