ರಾಜಧಾನಿ ಕೋಲ್ಕತಾದಿಂದ 15 ಕಿಮೀ ದೂರದಲ್ಲಿರುವ ಹೌರಾ ಜಿಲ್ಲೆಯಲ್ಲಿ ನಡೆದ ಈ ಘಟನೆ ನಡೆದಿದ್ದು, ತನ್ನ ಸಹಪಾಠಿಗಳ ಜತೆ ಪೆನ್ ಕೇಳಿದನೆಂಬ ಕ್ಷುಲ್ಲಕ ಕಾರಣಕ್ಕೆ, ತಾನು ಪಾಠ ಮಾಡುವ ವೇಳೆ ಆತ ಮಾತನಾಡಿದ ಎಂದು ಕೋಪಗೊಂಡ ಶಿಕ್ಷಕ ದೂರದಿಂದ ಕಬ್ಬಿಣದ ಸ್ಕೇಲ್ನ್ನು ಆತನೆಡೆಗೆ ಬೀಸಿದ್ದಾನೆ ಎಂದು ಬಾಲಕನ ಪಾಲಕರು ದೂರು ನೀಡಿದ್ದಾರೆ.
ಮೂರುವರೆ ವರ್ಷದ ಮಗುವೊಂದನ್ನು ಆಕೆಯ ಮನೆ ಪಾಠದ ಶಿಕ್ಷಕಿ ಅಮಾನುಷವಾಗಿ ಥಳಿಸಿದ ಪ್ರಕರಣ ವರದಿಯಾಗಿ ಮೂರು ದಿನ ಕಳೆಯುವಷ್ಟರಲ್ಲಿ ಅದನ್ನೇ ಹೋಲುವ ಈ ಪ್ರಕರಣ ವರದಿಯಾಗಿದೆ. ಪವಿತ್ರ ದೇಗುಲ ಎಂದು ಕರೆಸಿಕೊಳ್ಳುವ ಶಾಲೆ, ದೇವರೆಂದು ಪೂಜೆಗೊಳ್ಳುವ ಶಿಕ್ಷಕರು ಇತ್ತೀಚಿಗೆ ಕ್ರೂರಿಗಳಾಗಿ ವರ್ತಿಸುತ್ತಿರುವುದು ವಿಷಾದನೀಯವಾಗಿದೆ.