ಭಾರತದ ಏಕತೆ ಮತ್ತು ವೈವಿಧ್ಯತೆಗೆ ಒತ್ತುನೀಡುತ್ತಾ,ಜಾತೀಯತೆ ಮತ್ತು ಕೋಮುವಾದದ ವಿಷಬೀಜಕ್ಕೆ ನಮ್ಮ ರಾಷ್ಟ್ರದಲ್ಲಿ ಜಾಗವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಕೆಂಪುಕೋಟೆಯಿಂದ ತಮ್ಮ ಎರಡನೇ ಸ್ವಾತಂತ್ರ್ಯ ದಿನಾಚರಣೆ ಭಾಷಣವನ್ನು ಮಾಡಿದ ನರೇಂದ್ರ ಮೋದಿ ಭ್ರಷ್ಟಾಚಾರ ವಿಷಯದ ಬಗ್ಗೆ ಹೆಚ್ಚು ಗಮನಸೆಳೆದರು.
ಭ್ರಷ್ಟಾಚಾರ ನಿವಾರಣೆ ಮಾಡಿ, ಪಾರದರ್ಶಕತೆ ತರುವ ಬಗ್ಗೆ ಕೈಗೊಂಡ ಅನೇಕ ಉಪಕ್ರಮಗಳನ್ನು ಮೋದಿ ವಿವರಿಸಿದರು.85 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಮೋದಿ ಹೆಚ್ಚು ನಿರೀಕ್ಷಿತ ಸಮಾನ ದರ್ಜೆ, ಸಮಾನ ಪಿಂಚಣಿ ಯೋಜನೆ ಕುರಿತು ಮಾತನಾಡಿದರು. ಆದರೆ ಅದರ ಅನುಷ್ಠಾನಕ್ಕೆ ಯಾವುದೇ ಕಾಲಮಿತಿಯನ್ನು ನೀಡಲು ಮೋದಿ ವಿಫಲರಾದರು.
ಜನರಲ್ಲಿ ನಂಬಿಕೆಯ ವಾತಾರವಣ ಬೆಳೆಯುತ್ತಿದೆ. ಕಳೆದ ವರ್ಷ ನಾನು ಇಲ್ಲಿದ್ದಾಗ ನನ್ನ ಆಶಯಗಳನ್ನು, ಕನಸುಗಳನ್ನು ಮುಂದಿಟ್ಟಿದ್ದೆ. ಆದರೆ ಈಗ ಟೀಂ ಇಂಡಿಯಾದಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ ಎಂದು ಹೇಳಲು ಬಯಸುತ್ತೇನೆ. ಒಂದು ವರ್ಷದಲ್ಲಿ ಟೀಂ ಇಂಡಿಯಾ ನವೀಕೃತ ವಿಶ್ವಾಸದೊಂದಿಗೆ ಎಲ್ಲಾ ಕನಸುಗಳನ್ನು ನೆರವೇರಿಸಲು ಬದ್ಧವಾಗಿದೆ ಎಂದರು.