ಜೈಲುಪಾಲಾಗಿ ಮುಖ್ಯಮಂತ್ರಿ ಗಾದಿಯನ್ನೇರುವ ಕನಸನ್ನು ಕಳೆದುಕೊಂಡಿರುವ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ನಿನ್ನೆ ಜೈಲಿನಿಂದಲೇ ತಮ್ಮ ಬೆಂಬಲಿಗ ಪಳನಿಸ್ವಾಮಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡಿದರು. ದೂರದರ್ಶನದಲ್ಲಿ ಪ್ರಮಾಣವಚನ ಸಮಾರಂಭವನ್ನು ವೀಕ್ಷಿಸುತ್ತಿದ್ದ ಅವರ ಕಣ್ಣಿಂದ ನೀರು ಹನಿಹನಿಯಾಗಿ ಇಳಿಯುತ್ತಿತ್ತು. ತಮ್ಮ ಬೆಂಬಲಿಗ ಸಿಎಂ ಗಾದಿಯನ್ನೇರುತ್ತಿರುವ ಬಗ್ಗೆ ಸಮಾಧಾನವಿದ್ದರೂ, ಇದು ತಮ್ಮ ಕನಸು ಇತರರ ಪಾಲಾಗುತ್ತಿರುವುದರ ದುಃಖದ ಪ್ರತೀಕದಂತಿದ್ದು ಅವರ ಮೌನಶೋಕ.