ಬಿಹಾರ್ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, ಕೇವಲ ಪುಸ್ತಕದ ಮುಖಪುಟ ನೋಡಿ ನಿರ್ಧರಿಸಬೇಡಿ. ಸಿಎಂ ನಿತೀಶ್ ಕುಮಾರ್ ನನ್ನ ಬಗ್ಗೆ ಹೆಮ್ಮೆ ಪಡುಪಡುವಂತೆ ಕಾರ್ಯನಿರ್ವಹಿಸಿ ತೋರಿಸುತ್ತೇನೆ ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಮಾಜಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿದ್ಧು ವ್ಯಂಗ್ಯವಾಗಿ ಟ್ವೀಟ್ ಮಾಡಿ, ಬಿಹಾರ್ ಉತ್ತಮ ಸರಕಾರ ಕಾರ್ಯನಿರ್ವಹಿಸಲು ಸಿದ್ದವಾಗಿದೆ. ಸುಶೀಲ್ ಮೋದಿಯಿಂದ ತೇಜಸ್ವಿ ಯಾದವ್ ಅವರ ಅಧಿಕಾರವಧಿಯಲ್ಲಿ ಬಿಹಾರ್ ಉತ್ತಮ ಅಭಿವೃದ್ಧಿ ಸಾಧಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.