ಐದು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಸ್ ಯಾವುದೇ ರೀತಿಯ ದಾಳಿಯನ್ನು ತಡೆಯಲು ಸಶಕ್ತವಾಗಿದೆ. ಬಸ್ನಲ್ಲಿ ಬೆಡ್ ರೂಮ್, ವಿಶ್ರಾಂತಿ ಕೋಣೆ, ಸಭೆ ನಡೆಸುವ ಹಾಲ್, ಇಂಟರ್ನೆಟ್ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಬಡವರಿಗೆ, ಶೋಷಿತರಿಗಾಗಿ ರಾಜಕೀಯ ಸೇವೆ ಸಲ್ಲಿಸುತ್ತೇನೆ ಎಂದು ಅಧಿಕಾರಕ್ಕೇರಿದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಇದೀಗ ಬಡವರನ್ನು, ಶೋಷಿತರನ್ನು ಮರೆತು ಐಷಾರಾಮಿ ಜೀವನಕ್ಕೆ ಮೊರೆಹೋಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.