ಗಂಗಾ ನದಿ ಸ್ವಚ್ಚತಾ ಅಭಿಯಾನಕ್ಕಾಗಿ ನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಗಂಗಾ ನದಿ ಸ್ವಚ್ಚವಾಗಿರುವ ಒಂದು ಸ್ಥಳದ ಬಗ್ಗೆ ನಮಗೆ ಮಾಹಿತಿ ಕೊಡಿ. ಪರಿಸ್ಥಿತಿ ಹಿಂದಿಗಿಂತಲೂ ಕೆಟ್ಟದಾಗಿದೆ ಎಂದು ಕೇಂದ್ರ ಸರಕಾರಕ್ಕೆ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆಕ್ರೋಶ ವ್ಯಕ್ತಪಡಿಸಿದೆ.
ಗಂಗಾ ನದಿ ಸ್ವಚ್ಚತೆಗಾಗಿ 5000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಮತ್ತಷ್ಟು ಕಲುಷಿತಗೊಳಿಸಿದ್ದೀರಿ. ಕೇಂದ್ರ ಸರಕಾರ ವೆಚ್ಚ ಮಾಡಿದೆಯೇ ಅಥವಾ ರಾಜ್ಯ ಸರಕಾರ ವೆಚ್ಚ ಮಾಡಿದೆಯೇ ಎನ್ನುವುದು ತಿಳಿಯುವ ಅಗತ್ಯವಿಲ್ಲ. 2500 ಕಿ.ಮೀ ಉದ್ದದ ಗಂಗಾ ನದಿ ಹರಿಯುವ ಯಾವುದೇ ಒಂದು ಸ್ಥಳ ಸ್ವಚ್ಚವಾಗಿದೆ ಎನ್ನುವುದು ವಿವರಿಸಿ ಎಂದು ನ್ಯಾಷನಲ್ ಗ್ರೀನ್ ಪೀಸ್ ಸಮಿತಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಕೇಂದ್ರ ಸರಕಾರಕ್ಕೆ ಚಾಟಿ ಏಟು ಬೀಸಿದರು.