ಕಣಿವೆ ನಾಡಿನಲ್ಲಿ ಉಗ್ರರ ಅಟ್ಟಹಾಸ: ಇಬ್ಬರು ಯೋಧರ ಹತ್ಯೆ

ಬುಧವಾರ, 5 ಆಗಸ್ಟ್ 2015 (12:24 IST)
ಉದಮ್‌ಪುರ್ ಜಿಲ್ಲೆಯ ಜಮ್ಮು - ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್ಎಫ್ ಪಡೆಗಳ ಮೇಲೆ ಮೇಲೆ ಉಗ್ರರು ದಾಳಿ ನಡೆಸಿದ್ದು ಇಬ್ಬರು ಯೋಧರು ಹುತಾತ್ಮರಾಗಿ ಎಂಟು ಜನ ಗಾಯಗೊಂಡಿದ್ದಾರೆ. ಭಾರತೀಯ ಯೋಧರು ಪ್ರತಿ ದಾಳಿ ನಡೆಸಿದ್ದು ಒಬ್ಬ ಉಗ್ರ ಮೃತನಾಗಿದ್ದಾನೆ. ಉಳಿದ ಉಗ್ರರು ಮೂವರು ಭಾರತೀಯ ನಾಗರಿಕರನ್ನು ಒತ್ತೆಯಾಳಾಗಿ ಮಾಡಿಕೊಂಡು ಕಾಡಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

ಜಮ್ಮು ಕಾಶ್ಮೀರದ ಉದಮ್‌ಪುರ್ ಜಿಲ್ಲೆಯಿಂದ 10 ಕೀಲೋಮೀಟರ್ ದೂರದಲ್ಲಿರುವ ಸಮರೋಲಿ ವಲಯದಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ಸಂಭವಿಸಿದೆ.  ವಾಹನದಲ್ಲಿ ಸಾಗುತ್ತಿದ್ದ ಭಾರತೀಯ ಭದ್ರತಾ ಪಡೆಯ ವಾಹನದ ಮೇಲೆ ಉಗ್ರರು ಹಠಾತ್ ಆಗಿ ದಾಳಿ ನಡೆಸಿದ್ದಾರೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ಸೇನೆಯ ಸಮವಸ್ತ್ರ ಧರಿಸಿ ಉಗ್ರರು ಗಡಿಯನ್ನು ಪ್ರವೇಶಿಸಿದ್ದರು ಎನ್ನಲಾಗುತ್ತಿದೆ. 
 
ಕಾಡಿನಲ್ಲಿ ಪರಾರಿಯಾಗಿರುವ ಉಗ್ರರಿಗಾಗಿ ಯೋಧರು ಶೋಧ ನಡೆಸಿದ್ದಾರೆ. 
 
ಕಳೆದೊಂದು ವಾರದಿಂದ ಪಾಕಿಸ್ತಾನ ಪಡೆಗಳು ನಿರಂತರವಾಗಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿವೆ. 
 
ದಾಳಿಯ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. 

ವೆಬ್ದುನಿಯಾವನ್ನು ಓದಿ