ಉತ್ತರಾಖಂಡದ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ಅಧಿಕಾರ ತ್ಯಜಿಸುವಂತೆ ಬಲವಂತ ಮಾಡಿಲ್ಲ ಎಂದು ಸರ್ಕಾರ ಇಂದು ಪ್ರತಿಪಾದಿಸಿದೆ. ಖುರೇಷಿ ಅವರಿಗೆ ರಾಜೀನಾಮೆ ನೀಡುವಂತೆ ಕೇಂದ್ರಸರ್ಕಾರದಿಂದ ಎರಡು ದೂರವಾಣಿ ಕರೆಗಳು ಬಂದಿರುವುದರ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.ಉತ್ತರಾಖಂಡದ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ವಜಾ ಮಾಡುವ ಯಾವುದೇ ಕ್ರಮವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.