ಮೂವರು ಬಿಜೆಪಿ ನಾಯಕರುಗಳ ರಾಜೀನಾಮೆಗೆ ಒತ್ತಾಯಿಸಿ ಸಂಸತ್ ಕಲಾಪ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಸಂಸದರನ್ನು ಭೇಟಿ ಮಾಡಿ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ ನಾಯಕರೊಂದಿಗೆ ಸಂಪರ್ಕಿಸಿ ಎಂದು ಸಂಸದರಿಗೆ ಕಟ್ಟಾಜ್ಞೆ ಜಾರಿ ಮಾಡಿದ್ದಾರೆ.
ಲಲಿತ್ಗೇಟ್ ಮತ್ತು ವ್ಯಾಪಂ ಹಗರಣದಿಂದ ಕೇಂದ್ರ ಸರಕಾರದ ಮತ್ತು ಬಿಜೆಪಿ ಪಕ್ಷದ ಇಮೇಜಿಗೆ ಧಕ್ಕೆಯಾಗಿದೆ. ಇದರಿಂದ ಬಿಜೆಪಿ ನಾಯಕರೆಲ್ಲರು ತಲೆತಗ್ಗಿಸುವಂತಾಗಿದೆ ಎಂದು ಹಿಮಾಚಲ ಪ್ರದೇಶದ ಸಂಸದ ಶಾಂತಕುಮಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಪತ್ರ ಬರೆದ ನಂತರ ಮೋದಿ ಹೇಳಿಕೆ ಹೊರಬಿದ್ದಿದೆ.