ಭಯೋತ್ಪಾದನೆ ನಿಗ್ರಹ ಕುರಿತಂತೆ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖರ್ಜಿ, ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎನ್ನುವುದಿಲ್ಲ. ಭಯೋತ್ಪಾದನೆ ಎನ್ನುವುದು ರಾಕ್ಷಸನಿದ್ದಂತೆ. ಅದನ್ನು ನಿರ್ಮೂಲನೆಗೊಳಿಸುವುದು ವಿಶ್ವದ ಏಕೈಕ ಗುರಿಯಾಗಿರಬೇಕು ಎಂದರು.
ಅಫ್ಘಾನಿಸ್ತಾನ ಶಾಂತಿ ಸ್ಥಾಪನೆಗೆ ಬದ್ಧವಾಗಿದ್ದು, ಫೆಬ್ರವರಿ 6 ರಂದು ಇಸ್ಲಾಮಾಬಾದ್ನಲ್ಲಿ ತಾಲಿಬಾನ್ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಯಲಿದೆ. ದೇಶದ ನೆರೆ ಹೊರೆಯ ರಾಷ್ಟ್ರಗಳು ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸುವುದು ನಿಲ್ಲಿಸಬೇಕು ಎಂದು ಅಫ್ಗಾನಿಸ್ತಾನ್ ಮುಖಂಡ ಅಬ್ದುಲ್ಲಾ ಅಬ್ದುಲ್ಲಾ ಗುಡುಗಿದರು.