ಬಾಹುಬಲಿ ಹರೀಶ್ ರಾವತ್ ನೋಡಿ ತಬ್ಬಿಬ್ಬಾದ ಮೋದಿ, ಶಾ (ವಿಡಿಯೋ)

ಶುಕ್ರವಾರ, 3 ಫೆಬ್ರವರಿ 2017 (14:38 IST)
ಪಂಚರಾಜ್ಯಗಳ ಚುನಾವಣೆ ದಿನದಿನಕ್ಕೂ ರಂಗೇರುತ್ತಿದ್ದು ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಬಾಹುಬಲಿ ಅವತಾರ ತಾಳಿದ್ದಾರೆ. ಸಂಪೂರ್ಣ ರಾಜ್ಯವನ್ನು ಹೆಗಲ ಮೇಲೆ ಹೊತ್ತ ರಾವತ್ ಅವರನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಿಗ್ಭ್ರಮೆಯಿಂದ ನೋಡುತ್ತಿದ್ದಾರೆ - ಈ ದೃಶ್ಯಾವಳಿಗಳನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರು ಹರಿಯಬಿಟ್ಟಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು. ಸಿನಿಮಾದಲ್ಲಿ ಬಾಹುಬಲಿ ಶಿವಲಿಂಗವನ್ನು ಎತ್ತುತ್ತಿದ್ದರೆ ಅದನ್ನು ಎಡಿಟ್ ಮಾಡಿ ರಾವತ್ ಅವರ ಮುಖವನ್ನು ಬಾಹುಬಲಿ ಮುಖಕ್ಕೆ ಅಂಟಿಸಲಾಗಿದೆ. ಶಿವಲಿಂಗದ ರೂಪದಲ್ಲಿರುವ ಉತ್ತರಾಖಂಡವನ್ನು ರಾವತ್ ಎತ್ತುತ್ತಿದ್ದು ಅವರನ್ನು ರಾಜ್ಯ ರಕ್ಷಕನಂತೆ ಬಿಂಬಿಸಲಾಗಿದೆ.
 
ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 5,000ಕ್ಕಿಂತ ಹೆಚ್ಚು ಸಲ ಇದನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋದ ಕೊನೆಯಲ್ಲಿ ಸಂದೇಶವೂ ಇದೆ. ದಿಲ್ ಕಿ ಬಾತ್ ಸುನೆ..ಹರೀಶ್ ರಾವತ್‌ಕೋ ಚುನೆ (ಮನಸ್ಸಿನ ಮಾತು ಕೇಳಿ, ಹರೀಶ್ ರಾವತ್‍ರನ್ನು ಆಯ್ಕೆ ಮಾಡಿ). ಈ ವಿಡಿಯೋಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ರಾವತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
 
ಉತ್ತರಾಖಂಡ ವಿಧಾನಸಭೆಗೆ ಇದೇ 15ರಂದು ಮತದಾನ ನಡೆಯಲಿದೆ.
ಬಾಹುಬಲಿಯಾದ ಹರೀಶ್ ರಾವತ್; ತಬ್ಬಿಬ್ಬಾದ ಮೋದಿ, ಶಾ (ವಿಡಿಯೋ)

ವೆಬ್ದುನಿಯಾವನ್ನು ಓದಿ