ರಾಷ್ಟ್ರಗೀತೆಗೆ ಅಪಮಾನ ಮಾಡಿದ ಕುಟುಂಬವನ್ನು ಹೊರಹಾಕಿದ ಜನರು

ಸೋಮವಾರ, 30 ನವೆಂಬರ್ 2015 (18:22 IST)
ರಾಷ್ಟ್ರಗೀತೆ ಹಾಡುತ್ತಿರುವಾಗ ಎದ್ದು ನಿಲ್ಲದೇ ಕುಳಿತುಕೊಂಡಿದ್ದ ಕುಟುಂಬದ ಸದಸ್ಯರಿಗೆ ಥಿಯೇಟರ್‌ನಿಂದ ಹೊರಹೋಗುವಂತೆ ಕೋರಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
 
ವಿಡಿಯೋದಲ್ಲಿ ಕೆಲವರ ಗುಂಪು, ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದಿರುವುದಕ್ಕೆ ಥಿಯೇಟರ್‌ನಲ್ಲಿ ಕುಳಿತಿದ್ದ ಕುಟುಂಬದ ಸದಸ್ಯರೊಂದಿಗೆ ವಾಗ್ವಾದದಲ್ಲಿ ತೊಡಗಿರುವುದು ಕಂಡು ಬಂದಿದೆ. ವಾಗ್ವಾದ ವಿಕೋಪಕ್ಕೆ ತೆರಳುತ್ತಿದ್ದಂತೆ ಪಿವಿಆರ್ ಸಿನೆಮಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕುಳಿತಿದ್ದ ಕುಟುಂಬದ ಸದಸ್ಯರನ್ನು ಹೊರಹೋಗುವಂತೆ ಕೋರಿದ್ದಾರೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ ಕುಟುಂಬದ ಸದಸ್ಯಟರು ಹೊರಹೋದಾಗ ಥಿಯೇಟರ್‌ನಲ್ಲಿ ಸಂತಸದಿಂದ ಕೂಗುತ್ತಿರುವುದು ಕಂಡುಬಂದಿದೆ. 
 
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ದಿಪೀಕಾ ಪಡುಕೋಣೆ ನಟಿಸಿದ್ದ ತಮಾಷಾ ಚಿತ್ರದ ಬಿಡುಗಡೆಯ ದಿನ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
 
ಯಾವ ನಗರದಲ್ಲಿ ಈ ಘಟನೆ ನಡೆದಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲವಾಗಿದ್ದರೂ, ಕೆಲ ವರದಿಗಳ ಪ್ರಕಾರ ಮುಂಬೈನ ಕುರ್ಲಾದಲ್ಲಿ ನಡೆದಿದೆ ಎನ್ನಲಾಗಿದೆ. ಇತರ ವರದಿಗಳ ಪ್ರಕಾರ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. 
 
ಪಿವಿಆರ್ ಸಿನೆಮಾ ಥಿಯೇಟರ್‌ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಘಟನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ