ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ನಖ್ವಿ, "ಇದು ಲಾಭ ಮತ್ತು ನಷ್ಟದ ಪ್ರಶ್ನೆಯಲ್ಲ. ಇದು ಶ್ರದ್ಧೆ ಮತ್ತು ವಿಶ್ವಾಸದ ವಿಚಾರ. ಇದು ಹಿಂದೂಗಳಿಗೆ ಸೂಕ್ಷ್ಮಾತಿಸೂಕ್ಷ್ಮ ವಿಷಯವಾಗಿದೆ", ಎಂದು ಗೋಹತ್ಯೆ ನಿಷೇಧದ ಅಗತ್ಯವನ್ನು ವಿವರಿಸಿದ್ದಾರೆ.
"ಆದರೆ ಬೀಫ್ ತಿನ್ನದಿದ್ದರೆ ಸಾಯುತ್ತೇವೆ ಎಂದು ಬೊಬ್ಬೆ ಹಾಕುತ್ತಿರುವವರು ಪಾಕಿಸ್ತಾನ, ಅರಬ್ ರಾಷ್ಟ್ರ ಅಥವಾ, ಅದು ಸಿಗುವಂತಹ ವಿದೇಶಗಳಿಗೆ ಹೋಗಬಹುದು", ಎಂದು ನಖ್ವಿ ಗೋಹತ್ಯೆ ನಿಷೇಧವನ್ನು ವಿರೋಧಿಸುವವರನ್ನುದ್ದೇಶಿಸಿ ಹೇಳಿದ್ದಾರೆ.