ಗೋಮಾಂಸ ತಿನ್ನದಿದ್ದರೆ ಸಾಯುತ್ತೇವೆ ಎನ್ನುವವರು ಪಾಕ್‌ಗೆ ಹೋಗಿ: ನಖ್ವಿ

ಶುಕ್ರವಾರ, 22 ಮೇ 2015 (11:50 IST)
ಗೋಹತ್ಯೆ ನಿಷೇಧವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ    ಗೋಮಾಂಸ ತಿನ್ನಲು ಬಯಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದಾರೆ

ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ನಖ್ವಿ, "ಇದು ಲಾಭ ಮತ್ತು ನಷ್ಟದ ಪ್ರಶ್ನೆಯಲ್ಲ. ಇದು ಶ್ರದ್ಧೆ ಮತ್ತು ವಿಶ್ವಾಸದ ವಿಚಾರ. ಇದು ಹಿಂದೂಗಳಿಗೆ ಸೂಕ್ಷ್ಮಾತಿಸೂಕ್ಷ್ಮ ವಿಷಯವಾಗಿದೆ", ಎಂದು ಗೋಹತ್ಯೆ ನಿಷೇಧದ ಅಗತ್ಯವನ್ನು ವಿವರಿಸಿದ್ದಾರೆ. 
 
"ಆದರೆ ಬೀಫ್ ತಿನ್ನದಿದ್ದರೆ ಸಾಯುತ್ತೇವೆ ಎಂದು ಬೊಬ್ಬೆ ಹಾಕುತ್ತಿರುವವರು ಪಾಕಿಸ್ತಾನ, ಅರಬ್ ರಾಷ್ಟ್ರ ಅಥವಾ, ಅದು ಸಿಗುವಂತಹ ವಿದೇಶಗಳಿಗೆ ಹೋಗಬಹುದು", ಎಂದು ನಖ್ವಿ  ಗೋಹತ್ಯೆ ನಿಷೇಧವನ್ನು ವಿರೋಧಿಸುವವರನ್ನುದ್ದೇಶಿಸಿ ಹೇಳಿದ್ದಾರೆ. 
 
ಮುಸ್ಲಿಂ‌ಮ್‌ರು ಕೂಡ ಗೋಹತ್ಯೆ ವಿರುದ್ಧವಿದ್ದಾರೆ ಎಂದು ಅವರು ವಾದಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ