ಶಿಕ್ಷಕನನ್ನು ಕೊಲೆಗೈದ 7 ನೇ ತರಗತಿಯ ಮೂವರು ವಿದ್ಯಾರ್ಥಿಗಳು

ಶುಕ್ರವಾರ, 19 ಡಿಸೆಂಬರ್ 2014 (15:21 IST)
ಏಳನೇ ತರಗತಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ತಮ್ಮ ಶಿಕ್ಷಕನನ್ನೇ ಕೊಂದ ದಾರುಣ ಘಟನೆ ವೆಸ್ಟ್ ಸಿಂಗ್ಭೂಮ್ ಜಿಲ್ಲೆಯ ತುಂಗ್ರಿ ಮೊಹಲ್ಲಾ ಪ್ರದೇಶದಲ್ಲಿ ನಡೆದಿದೆ. ಮೂವರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಮಕ್ಕಳು ಧೂಮಪಾನ ಮತ್ತು ಕುಡಿತದ ದಾಸರಾಗಿದ್ದು ಶಿಕ್ಷಕ ಜೆಸ್ಲಿನ್ ತೊಪ್ನೋ ಅರಿವಿಗೆ ಬಂದಿತ್ತು. ಆದ್ದರಿಂದ ಆ ಮೂವರನ್ನು ಕರೆದು ಬುದ್ಧಿ ಹೇಳಿದ್ದ ಆತ, ಈ ದುಶ್ಚಟಗಳನ್ನು ತ್ಯಜಿಸದಿದ್ದರೆ  ನಿಮ್ಮ ತಂದೆ-ತಾಯಿಗಳಿಗೆ ಮಾಹಿತಿ ನೀಡುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಸರ್ಕಲ್ ಇನ್ಲಪೆಕ್ಟರ್  ಸುಧೀರ್ ಕುಮಾರ್ ತಿಳಿಸಿದ್ದಾರೆ.  
 
ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬ ಶಿಕ್ಷಕ ವಾಸಿಸುತ್ತಿದ್ದ ಕಟ್ಟಡದಲ್ಲಿ ಇದ್ದ ಬಾಡಿಗೆ ಮನೆಯಲ್ಲಿದ್ದ. ಆತನ ಮನೆಗೆ ನಿಯಮಿತವಾಗಿ ಬರುತ್ತಿದ್ದ ಮತ್ತಿಬ್ಬರು ಬಾಲಕರು ಶಿಕ್ಷಕನನ್ನು ಕೊಂದು ಹಣವನ್ನು ಲೂಟಿ ಮಾಡಿ ಮೊಟಾರ್ ಸೈಕಲ್ ಕೊಳ್ಳಲು ಯೋಜಿಸಿದರು ಮತ್ತು ತಮ್ಮ ಸ್ನೇಹಿತನೊಬ್ಬನ ಜತೆ ಗನ್ ಕೊಡಲು ಹೇಳಿದರು. ಆದರೆ ಆತ ನಿರಾಕರಿಸಿದ. ಹೀಗಾಗಿ ಕೊಡಲಿಯಿಂದ ಶಿಕ್ಷಕನನ್ನು ಕೊಲ್ಲಲು ನಿರ್ಧರಿಸಿದರು.
 
ಯೋಜನೆಯಂತೆ ಶಿಕ್ಷಕನ ಮನೆಯನ್ನು ಪ್ರವೇಶಿಸಿದ ವಿದ್ಯಾರ್ಥಿಗಳು ಆತನ ಮೇಲೆ ಕೊಡಲಿಯಿಂದ ದಾಳಿ ನಡೆಸಿ ಕೊಲೆಗೈದರು. ಈ ಘಟನೆಯನ್ನು ಬಹಿರಂಗ ಪಡಿಸಬಹುದೆಂಬ ಭಯದಿಂದ ಶಿಕ್ಷಕನ ಜತೆ ವಾಸಿಸುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಕೊಲ್ಲುವ ಯತ್ನ ನಡೆಸಿದರು. ಆದರೆ ಅದೃಷ್ಟವಶಾತ್ ಆತ ಬದುಕುಳಿದಿದ್ದಾನೆ.

ವೆಬ್ದುನಿಯಾವನ್ನು ಓದಿ