ಬಂಡವಾಳ ಷಾಹಿಗಳಿಗೆ ಎನ್ಡಿಎ ತನ್ನನ್ನು ತಾನೇ ಮಾರಿಕೊಂಡಿದೆ, ಟಿಎಂಸಿ ಟೀಕೆ

ಮಂಗಳವಾರ, 25 ನವೆಂಬರ್ 2014 (15:50 IST)
ವಿದೇಶಿ ಬ್ಯಾಂಕ್ ಗಳಲ್ಲಿ ಭದ್ರತೆಗೊಳಿಸಿರುವ ಕಪ್ಪು ಹಣವನ್ನು ವಾಪಸ್ ತರುವಲ್ಲಿ ವಿಫಲವಾಗಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ, ಬಂಡವಾಳಷಾಹಿಗಳಿಗೆ ತನ್ನನ್ನು ತಾನು ಮಾರಿಕೊಂಡಿದೆ ಎಂದು ತೃಣ ಮೂಲ ಕಾಂಗ್ರೆಸ್ ಸದಸ್ಯರು ಇಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  
 
ಸರ್ಕಾರದ ವಿರುದ್ಧ ಹರಿಹಾಯ್ದ ಪಕ್ಷದ ಸದಸ್ಯ ಸುಖೆಂಡು ಶೇಖರ್ ರಾಯ್, ಕೇವಲ 100 ದಿನಗಳ ಒಳಗೆ ಕಪ್ಪು ಹಣವನ್ನು ವಾಪಾಸ್ ತರುವುದಾಗಿ ಆಶ್ವಾಸನೆ ನೀಡಿದ್ದ ಕೇಂದ್ರ, 200 ದಿನಗಳು ಕಳೆದರೂ ಕೂಡ ವಾಪಾಸ್ ತರಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಗ್ಗೆ ಕೂಡಲೇ ಉತ್ತರಿಸಬೇಕು. ಅಲ್ಲದೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕೇಂದ್ರ ಪಿತೂರಿ ನಡೆಸುತ್ತಿದ್ದು, ಬಂಡವಾಳಷಾಹಿಗಳಿಗೆ ತನ್ನನ್ನು ತಾನು ಮಾರಿಕೊಂಡಿದೆ ಎಂದು ಟೀಕಿಸಿದ್ದಾರೆ. 
 
ಟಿಎಂಸಿ ಸದಸ್ಯರು 'ಬ್ರಿಂಗ್ ಬ್ಯಾಕ್ ಮನಿ' ಎಂದು ಬರೆಯಲಾಗಿದ್ದ ಛತ್ರಿಗಳನ್ನು ಹಿಡಿದು ಗದ್ದಲ ಎಬ್ಬಿಸಿದಘಟನೆ ಕೂಡಾ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ