ಮತ್ತೊಂದು ಚುನಾವಣೆ ಭರವಸೆ ಈಡೇರಿಸಲು ನಿರ್ಧರಿಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಂಬರುವ 2017ರ ವೇಳೆಗೆ ಬಿಹಾರ್ನಲ್ಲಿರುವ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಸಂಪರ್ಕ ನೀಡುವಂತೆ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಿತೀಶ್ ಕುಮಾರ್, ಏಳು ಭರವಸೆಗಳನ್ನುಜನತೆಗೆ ನೀಡಿದ್ದು ಈಗಾಗಲೇ ಒಂದು ಮದ್ಯ ನಿಷೇಧಕ್ಕೆ ಆದೇಶಿಸಿ ಭರವಸೆಯನ್ನು ಈಡೇರಿಸಿದ್ದಾರೆ. ಇದೀಗ ಉಚಿತ ವಿದ್ಯುತ್ ಸಂಪರ್ಕ ಭರವಸೆಯನ್ನು ಜಾರಿಗೊಳಿಸಲು ಆದೇಶಿಸಿದ್ದಾರೆ.