ಕಿರುತೆರೆ ನಟ ಗಜೇಂದ್ರ ಚೌಹಾಣ್ ಅವರನ್ನು ಎಫ್ಟಿಟಿಐ ಚೇರ್ಮನ್ ಆಗಿ ನೇಮಕ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡಿರುವ ಗಾಂಧಿ, "ನೀವು ನಮಗೆ ಪೂರಕವಾಗಿ ನಡೆದರೆ ಒಳ್ಳೆಯದು, ಇಲ್ಲ ನಿಮ್ಮನ್ನು ಹೊಸಕಿ ಹಾಕುತ್ತೇವೆ. ಎಂಬುದು ಕೇಂದ್ರ ಸರ್ಕಾರದ ನೀತಿ. ಜನರ ಬಾಯಿ ಮುಚ್ಚಿಸಲು ಅವರು ರಾಷ್ಟ್ರ ದ್ರೋಹಿ, ಹಿಂದೂ ವಿರೋಧಿ ಎಂಬ ಹಣೆಪಟ್ಟಿಗಳನ್ನು ಕಟ್ಟುತ್ತಾರೆ", ಎಂದು ಎಚ್ಚರಿಸಿದ್ದಾರೆ.