ಗುಜರಾತಿನ ಭಾವ್ ನಗರದಲ್ಲಿ ಆಯೋಜಿಸಲಾಗಿದ್ದ ವಿಹಿಂಪದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಮಾತನಾಡುತ್ತಿದ್ದ ತೊಗಾಡಿಯಾ "ದೇಶದಲ್ಲಿನ ಮುಸ್ಲಿಮರ ಹಿರಿಯರು ಸನಾತನ ಧರ್ಮದವರಾಗಿದ್ದರು. ಜತೆಗೆ ಕ್ರಿಶ್ಚಿಯನ್ನರ ಪೂರ್ವಿಕರು ಕೂಡ ಹಿಂದೂ ಧರ್ಮಾನುಯಾಯಿಗಳೇ ಆಗಿದ್ದರು. ಮೊಘಲ್ರ ಆಳ್ವಿಕೆಯಲ್ಲಿ ಮತಾಂತರ ನಡೆದಿತ್ತು. ಆ ಕಾಲದಲ್ಲಿ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಪರಿವರ್ತಿಸಲಾಯಿತು.ಮತ್ತೆ ಕೆಲವರು ದಬ್ಬಾಳಿಕೆಗೆ ಹೆದರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬುದಕ್ಕೆ ಐತಿಹಾಸಿಕ ಪುರಾವೆ ಇದೆ" ಎಂದಿದ್ದಾರೆ.