ಆಂಧ್ರ ಪ್ರದೇಶದ ನೂತನ ರಾಜಧಾನಿ ರಚನೆಗೆ ಸರ್ಕಾರ ಮುಂದಾಗಿದ್ದು, ಅಗತ್ಯ ಭೂಮಿಯ ಸ್ವಾದೀನಕ್ಕೆ ರೈತರು ಸಮ್ಮತಿಸುತ್ತಿಲ್ಲ ಎಂಬ ವಿಷಯ ಹಿನ್ನೆಲೆಯಲ್ಲಿ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಜಿಲ್ಲೆಯ ಉಂದವಲ್ಲಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಇನ್ನು ಚರ್ಚೆ ವೇಳೆ, ಭೂಮಿಯು ಫಲವತ್ತಾಗಿದ್ದು, ಇಲ್ಲಿನ ಭೂಮಿ ಬೆಳೆ ಬೆಳೆಯಲು ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಮ್ಮ ಭೂಮಿಯನ್ನು ಒಪ್ಪಿಸಲು ಸಾಧ್ಯವಿಲ್ಲ ಎಂದು ರೈತರು ಪವನ್ ಗಮನಕ್ಕೆ ತಂದರು.