ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದ 500 ಕ್ಕೂ ಹೆಚ್ಚು ಉಗ್ರರು ಭಾರತ ಮತ್ತೊಮ್ಮೆ ದಾಳಿ ನಡೆಸಬಹುದೆಂಬ ಭೀತಿಯಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಗೃಹ ಇಲಾಖೆ ವರದಿ ತಿಳಿಸಿದೆ. ಅವರೆಲ್ಲರೂ ಪಾಕಿಸ್ತಾನದ ನಗರಗಳಿಗೆ ಪಲಾಯನಗೈದಿದ್ದಾರೆ. ಅಲ್ಲಿಂದ ಸ್ಥಳಾಂತರವಾಗಲು ಅವರಿಗೆ ಪಾಕ್ ಸೇನೆಯೇ ಸಹಾಯ ಮಾಡಿದೆ ಎಂದು ತಿಳಿದು ಬಂದಿದೆ.