ಬುಲಂದ್ ಶಹ್ರ್ ಜಿಲ್ಲೆಯ ಕಮಲ್ ಪುರ್ ಗ್ರಾಮದ ನಿವಾಸಿ ಫರಾದ್ ಅಹ್ಮದ್ ಜಿಲ್ಲಾಧಿಕಾರಿ ಬಿ. ಚಂದ್ರಕಲಾ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದಕ್ಕೆ ಹೋಗಿದ್ದ. ವೇದಿಕೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿ ಅಹ್ಮದ್ ಪಕ್ಕ ನಿಂತು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ.ಫೋಟೋ ತೆಗೆಯಬೇಡ. ಅದಕ್ಕೆ ಮೊದಲೆ ಮುಂಚೆಯೇ ಅನುಮತಿ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರೂ ಅತ್ಯುತ್ಸಾಹದಲ್ಲಿದ್ದ ಹುಡುಗ ಅದಕ್ಕೆ ಕ್ಯಾರೆ ಅನ್ನಲಿಲ್ಲ. ಆತ ಪೋಟೋ ತೆಗೆಯುವುದನ್ನು ಮುಂದುವರೆಸಿದ.