ಮಹಿಳೆಯು ತನ್ನ ಪತಿ ಹಾಗೂ ಚಿಕ್ಕಪ್ಪನೊಂದಿಗೆ ಸಂಬಂಧಿಯೋರ್ವರ ಮದುವೆಯ ಹಿಂದಿನ ದಿನದ ಸಮಾರಂಭಕ್ಕೆ ತೆರಳಿದ್ದಳು. ಸಮಾರಂಭ ಮುಗಿಯುತ್ತಿದ್ದಂತೆಯೆ ಮಹಿಳೆಗೆ ಆಕೆಯ ಚಿಕ್ಕಪ್ಪನು, ಆಕೆಯ ಪತಿ ಗಣೇಶಪುರಿ ಗ್ರಾಮದಲ್ಲಿನ ತನ್ನ ಮನೆಗೆ ಹೋದನೆಂದು ಸುಳ್ಳು ಹೇಳಿದ.
ಈ ಸುಳ್ಳನ್ನು ನಂಬಿದ ಮಹಿಳೆಯು ಒಂಟಿಯಾಗಿ ತನ್ನ ಮನೆಗೆ ಹೋಗಲು ಮುಂದಾದಳು. ಆದರೆ ಆಕೆಗೆ ಗೊತ್ತಿಲ್ಲದಂತೆ ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಆಕೆಯ ಚಿಕ್ಕಪ್ಪನು ಆಕೆಯ ಕೈಹಿಡಿದು ಎಳೆದುಕೊಂಡು ಸಮೀಪದ ಅರಣ್ಯಕ್ಕೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದನು. ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಪರಿಣಾಮ ಗಂಭೀರವಾಗುವುದೆಂಬ ಎಚ್ಚರಿಕೆಯನ್ನೂ ಆತ ಆಕೆಗೆ ನೀಡಿದ್ದ.