ಒಂದು ವೇಳೆ, ಕೇಂದ್ರ ಸರಕಾರ ಲಕ್ನೋ ಆಗ್ರಾ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಹೆದ್ದಾರಿಯಲ್ಲಿ ಬುಲೆಟ್ ರೈಲು ಯೋಜನೆ ಸ್ಥಾಪಿಸಲು ಬಯಸಿದಲ್ಲಿ, ಉಚಿತವಾಗಿ ಭೂಮಿ ನೀಡಲು ಸಿದ್ದ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಘೋಷಿಸಿದ್ದಾರೆ.
ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದ ಸಿಎಂ ಅಖಿಲೇಶ್, ಉತ್ತರಪ್ರದೇಶ ಸರಕಾರ ತನ್ನದೇ ಆದ ಸಂಪನ್ಮೂಲಗಳಿಂದ ದೇಶದಲ್ಲಿಯೇ ಆಗ್ರಾ ಮತ್ತು ಲಕ್ನೋ ಮಧ್ಯ ಅತಿ ಉದ್ದದ ಎಕ್ಸ್ಪ್ರೆಸ್ ವೇ ನಿರ್ಮಿಸುತ್ತಿದೆ. ಒಂದು ವೇಳೆ, ಕೇಂದ್ರ ಸರಕಾರ ಹೆದ್ದಾರಿಯ ಪಕ್ಕದಲ್ಲಿ ಬುಲೆಟ್ ರೈಲು ಯೋಜನೆ ಜಾರಿಗೊಳಿಸಲು ಇಚ್ಚಿಸಿದಲ್ಲಿ ಉಚಿತ ಭೂಮಿ ನೀಡುವುದಾಗಿ ತಿಳಿಸಿದ್ದಾರೆ.