ಉತ್ತರಪ್ರದೇಶ: ಪತ್ನಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಪತಿ ಮಹಾಶಯ

ಸೋಮವಾರ, 27 ಜುಲೈ 2015 (16:54 IST)
ಕೌಟಂಬಿಕ ಕಲಹಗಳಿಂದ ಬೇಸತ್ತಿದ್ದ ಪತಿ ಮಹಾಶಯ ನಿನ್ನೆ ಮಧ್ಯರಾತ್ರಿ ಪತ್ನಿ ಬಬಿತಾಳನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ವರದಿಯಾಗಿದೆ. 
 
ಕರುಣಾ ಶಂಕರ್ ಎಂಬಾತ ತನ್ನ 26 ವರ್ಷ ವಯಸ್ಸಿನ ಪತ್ನಿ ಬಬಿತಾಳನ್ನು ಹರಿತವಾದ ಆಯುಧದಿಂದ ಇರಿದು ನಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಪೊಲೀಸರು ನಂತರ ಆರೋಪಿಯ ನಿವಾಸಕ್ಕೆ ತೆರಳಿ ಹತ್ಯೆಯಾದ ಬಬಿತಾಳ ಶವವನ್ನು ಪೋಸ್ಟ್‌ಮಾರ್ಟಂಗಾಗಿ ಕಳಹಿಸಿ ಕುಟುಂಬದ ಸದಸ್ಯರ ವಿಚಾರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಸೇನ್ ತಿಳಿಸಿದ್ದಾರೆ.
 
ಕುಟುಂಬದ ಸದಸ್ಯರ ನಡುವೆ ನಡೆಯುತ್ತಿದ್ದ ವಾಗ್ವಾದ ಪತಿ ಪತ್ನಿಯಲ್ಲೂ ವಿರಸ ಮೂಡಿಸಿತ್ತು ಎನ್ನಲಾಗಿದೆ. ಪ್ರತಿನಿತ್ಯ ಪತಿ ಕರುಣಾ ಶಂಕರ್ ಮತ್ತು ಪತ್ನಿ ಬಬಿತಾಳ ಮಧ್ಯೆ ಜಗಳವಾಗುತ್ತಿತ್ತು ಎನ್ನಲಾಗಿದೆ.
 
ನಿನ್ನೆ ಮಧ್ಯ ರಾತ್ರಿ ಪತಿ ಮತ್ತು ಪತ್ನಿಯ ಮಧ್ಯೆ ನಡೆದ ಜಗಳ ವಿಕೋಪಕ್ಕೆ ಹೋದಾಗ ಪತಿ ಶಂಕರ್ ಹರಿತವಾದ ಆಯುಧದಿಂದ ಪತ್ನಿಯ ಮೇಲೆ ಹಲ್ಲೆ ಮಾಡಿದಾಗ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ