ಏನೇ ಆಗಲಿ ವಂದೇ ಮಾತರಂ ಹಾಡಲ್ಲ ಎಂದ ಉತ್ತರಾಖಂಡ್ ಕಾಂಗ್ರೆಸ್!

ಶುಕ್ರವಾರ, 14 ಏಪ್ರಿಲ್ 2017 (11:44 IST)
ಡೆಹ್ರಾಡೂನ್: ಏನೇ ಆಗಲಿ, ಯಾರು ಏನೇ ಹೇಳಲಿ ಯಾವುದೇ ಕಾರಣಕ್ಕೂ ವಂದೇ ಮಾತರಂ ಹಾಡಲ್ಲ ಎಂದು ಉತ್ತರಾಖಂಡ್ ರಾಜ್ಯದ ಕಾಂಗ್ರೆಸ್ ಪಕ್ಷ ಹೇಳಿಕೊಂಡಿದೆ.


 
ಪಕ್ಷದ ಸಭೆಗಳಲ್ಲಿ ಯಾವುದೇ ಕಾರಣಕ್ಕೂ ವಂದೇ ಮಾತರಂ ಹಾಡಲ್ಲ ಎಂದು ಕಾಂಗ್ರೆಸ್ ಖಡಾಖಂಡಿತವಾಗಿ ಹೇಳಿಕೊಂಡಿದೆ. ಆಡಳಿತಾರೂಢ ಬಿಜೆಪಿಯ  ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಉತ್ತರಖಂಡ್ ನಲ್ಲಿ ವಾಸಿಸುವವರು ವಂದೇ ಮಾತರಂ ಹೇಳಲೇಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಈ ರೀತಿ ಘೋಷಿಸಿದೆ.

 
ವಂದೇ ಮಾತರಂ ಹಾಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಯಾರೂ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ